
ಸಕಲೇಶಪುರ ವಲಯ ಅರಣ್ಯಾಧಿಕಾರಿಗಳು ನೆನ್ನೆ ಸತ್ತಿಗಾಲ್ ಗ್ರಾಮದ ರೆಡ್ಡಿ ತೋಟದಲ್ಲಿದ್ದ ಕಾಡಾನೆಗಳು ಇಂದು ಶಾಂತಪ್ಪ ಗೌಡ್ರು ತೋಟಕ್ಕೆ ಬಂದಿರುವ ಮಾಹಿತಿ ಮೇರೆಗೆ ಶಾಂತಪ್ಪ ಗೌಡ್ರು ತೋಟಕ್ಕೆ ಭೇಟಿ ನೀಡಿ ಸ್ಥಳ ಪರಿಶೀಲನೆ ಮಾಡಿದಾಗ ಆನೆಗಳು ಕಂಡು ಬಂದಿರುತ್ತವೆ. ಆದ್ದರಿಂದ ಕಾಡಾನೆಗಳ ಚಲನವಲನದ ಬಗ್ಗೆ ತೋಟದ ಮಾಲೀಕರು,ಸಾರ್ವಜನಿಕರು, ಗ್ರಾಮಸ್ಥರು ರೈತರಿಗೆ ಕೂಲಿ ಕಾರ್ಮಿಕರಿಗೆ ಎಚ್ಚರಿಕೆ ಯಿಂದ ಇರಬೇಕು ಎಂದು ಮುಂಜಾಗೃತಾ ಮಾಹಿತಿ ನೀಡಿದರು
